ಗಂಗಾವತಿ: ಯಲಬುರ್ಗಾ ಶಾಸಕರಾದ ಶ್ರೀ ಬಸವರಾಜ ರಾಯರೆಡ್ಡಿ ರವರೆ ಕಿಷ್ಕಿಂದಾ ಕ್ಷೇತ್ರದ ಬಗ್ಗೆ ನೀವು ಕೊಟ್ಟಂತ ಹೇಳಿಕೆ ನಾವು ಖಂಡನೆ ಮಾಡುತ್ತೇವೆ.
ಕಾರಣ ಈ ಕ್ಷೇತ್ರದ ಮಹಿಮೆ ನಿಮಗೆ ಸರಿಯಾಗಿ ತಿಳಿದಿಲ್ಲ , ನಿಮ್ಮಲ್ಲಿ ಮನಸ್ಸಿದ್ದರೆ ಕ್ಷೇತ್ರಕ್ಕೆ ಒಳ್ಳೆಯದನ್ನು ಬಯಸಿ ಅದು ಬಿಟ್ಟು ವಿಧಾನಸೌಧದಲ್ಲಿ ಕುಳಿತುಕೊಂಡು ಕಿಷ್ಕಿಂದಾ ಕ್ಷೇತ್ರದ ಬಗ್ಗೆ ಕೆಟ್ಟದಾಗಿ ಮಾತನಾಡುವುದು ನಿಮ್ಮ ಘನತೆಗೆ ಧಕ್ಕೆ ತರುತ್ತದೆ.
ಎಲ್ಲೋ ಒಂದೆರಡು ತಪ್ಪುಗಳಾದಲ್ಲಿ ಇಡೀ ಕ್ಷೇತ್ರ ತಪ್ಪಿಸಸ್ಥರೆಂದು ಮಾತನಾಡುವುದು ಸರಿಯಲ್ಲ.
ಕಿಷ್ಕಿಂದಾ ಕ್ಷೇತ್ರದ ಅಂಜನಾದ್ರಿ ಬೆಟ್ಟ ಇಡೀ ವಿಶ್ವವೆ ತಿರುಗಿ ನೋಡುವಷ್ಟು ಎತ್ತರಕ್ಕೆ ಬೆಳೆಯುತ್ತಿದೆ ಅದನ್ನು ಬೆಳೆಸುವ ಕೆಲಸವನ್ನು ನಾವೆಲ್ಲರೂ ಕೂಡಿಕೊಂಡು ಮಾಡೋಣ ಅದನ್ನು ಬಿಟ್ಟು ಅದಕ್ಕೆ ಕೆಟ್ಟ ಹೆಸರು ತರುವಂತ ಕೆಲಸ ಮಾಡುವುದು ಸರಿಯಲ್ಲ.
ಕಿಷ್ಕಿಂದಾ ಕ್ಷೇತ್ರದಲ್ಲಿ ಗಾಂಜಾ, ಡ್ರಗ್ ಮುಂತಾದ ಮಾದಕ ವಸ್ತುಗಳನ್ನು ಮಾರುತ್ತಿದ್ದಾರೆ ಎಂದು ನೀವು ಕೆಟ್ಟ ಆಪಾದನೆ ಮಾಡುತ್ತಿದ್ದೀರಿ.
ಆನೆಗುಂದಿ ಮತ್ತು ಅಂಜನಾದ್ರಿ ಸ್ಥಳಗಳು ಪ್ರೇಕ್ಷಣೀಯ ಸ್ಥಳಗಳಾಗಿವೆ ಇಲ್ಲಿನ ಎಷ್ಟೋ ಕುಟುಂಬಗಳಿಗೆ ಜೀವನ ನಡೆಸುವುದಕ್ಕೆ ಈ ಸ್ಥಳಗಳು ಸಹಕಾರಿಯಾಗಿದೆ ಇಂತಹ ಸ್ಥಳಗಳ ಬಗ್ಗೆ ಇಂತಹ ಹೇಳಿಕೆ ನೀಡಿರುವುದು ಖಂಡನೆಯ
ನಿಜಕ್ಕೂ ಆನೆಗುಂದಿ ಮತ್ತು ಅಂಜನಾದ್ರಿ ಅನೈತಿಕ ಚಟುವಟಿಕೆ ತಾಣವಾಗಿದೆಯಾ?
ನಿಮ್ಮ ಆರೋಪ ಸಲ್ಲದು ಇದೇ ಮುಂದುವರಿದಲ್ಲಿ ನಿಮ್ಮ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದರು.
ಬಾಕ್ಸ್
ಆನೆಗುಂದಿ ಮತ್ತು ಅಂಜನಾದ್ರಿ ಸ್ಥಳಗಳು ಪ್ರೇಕ್ಷಣೀಯ ಸ್ಥಳಗಳಾಗಿವೆ ಅಂಜನಾದ್ರಿ ಹನುಮ ಹುಟ್ಟಿದ ಸ್ಥಳವಾಗಿದೆ
ಈ ಸ್ಥಳಕ್ಕೆ ತನ್ನದೇ ಆದ ಇತಿಹಾಸವಿದೆ ಇಂತಹ ಸ್ಥಳಗಳ ಬಗ್ಗೆ ಬೆಜೊಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ ಇಂತಹ ಹೇಳಿಕೆಗಳು ತಮ್ಮ ಘನತೆಗೆ ಶೋಭೆ ತರುವುದಿಲ್ಲ.
ಹೆಚ್ ವಸಂತ್ ಕುಮಾರ್ ಕಟ್ಟಿಮನಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು
ಬಾಕ್ಸ್
ಉನ್ನತ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿ ಎಲ್ಲರಿಗೂ ಮಾದರಿಯಾಗಬೇಕೆ ಹೊರತು ಇಂತಹ ಬಿವಜವಾಬ್ದಾರಿ ಹೇಳಿಕೆಯನ್ನು ನೀಡುವುದು ಅವರ ಘನತೆಗೆ ಶೋಭೇ ತರುವುದಿಲ್ಲ ಇಂತಹ ಹೇಳಿಕೆ ನೀಡುವುದು ಖಂಡನೀಯ
ಆದಷ್ಟು ಬೇಗನೆ ತಮ್ಮ ಹೇಳಿಕೆಯನ್ನು ಹಿಂಪಡೆದು ಬಹಿರಂಗವಾಗಿ ಕ್ಷಮೆಯಾಚಿಸಬೇಕು.
ಮಲ್ಲೇಶ್ ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರು.
