ಗಂಗಾವತಿ.ಕನಕಗಿರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಪ್ರಜಾ ಐಕ್ಯತಾ ಪಾರ್ಟಿಯ ಅಭ್ಯರ್ಥಿಯಾಗಿ
ನಿವೃತ್ತ ತಹಶೀಲ್ದಾರರಾದ ಕೆ. ಬಾಲಪ್ಪ
ಕನಕಗರಿ: ಕನಕಗಿರಿ ವಿಧಾನಸಭಾ ಕ್ಷೇತ್ರದ ಭಾರತೀಯ ಪ್ರಜಾ ಐಕ್ಯತಾ ಪಾರ್ಟಿಯ ಅಭ್ಯರ್ಥಿಯಾದ ನಾನು ಕೆ. ಬಾಲಪ್ಪ, ಕ್ಷೇತ್ರದ ಮತದಾರರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ,


ನಮ್ಮ ಭಾರತೀಯ ಪ್ರಜಾ ಐಕ್ಯತಾ ಪಾರ್ಟಿಯ ರಾಷ್ಟ್ರಾಧ್ಯಕ್ಷರಾದ ಸನ್ಮಾನ್ಯ ಶ್ರೀ ವೀರಾರೆಡ್ಡಿ ಬೆಂಗಳೂರುರವರು ನನ್ನ ರಾಜಕೀಯ
ಅನುಭವ, ಸಾಮಾಜಿಕ ಸೇವೆ, ಸೇವಾಮನೋಭಾವ ಹಾಗೂ ಕ್ಷೇತ್ರದಲ್ಲಿನ
ಒಡನಾಟವನ್ನು ಗುರುತಿಸಿ, ನನ್ನನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಿಸಿ,
ನೇಮಕಪತ್ರವನ್ನು ನೀಡಿ, ಕ್ಷೇತ್ರದಲ್ಲಿ ಪ್ರಚಾರ ಮಾಡಲು ಆದೇಶಿಸಿರುತ್ತಾರೆ.


ಅದರನ್ವಯ ನಾನು ಭಾರತೀಯ ಪ್ರಜಾ ಐಕ್ಯತಾ ಪಾರ್ಟಿಯಿಂದ ಕನಕಗಿರಿ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ
ಸ್ಪರ್ಧಿಸುತ್ತಿದ್ದು, ನಾನು ಸಾರ್ವಜನಿಕ ಕ್ಷೇತ್ರದಲ್ಲಿ ಸದಾ ಹಗಲಿರುಳು ಶ್ರಮಿಸಿ, ಸೇವೆಯನ್ನು ಸಲ್ಲಿಸಲು ಸನ್ನದ್ಧನಾಗಿರುತ್ತೇನೆ.


ನಮ್ಮ ಪಕ್ಷದ ಪ್ರಣಾಳಿಕೆಗಳು ಈ ಕೆಳಗಿನಂತಿರುತ್ತವೆ.
1) ಕ್ಷೇತ್ರದ ಎಲ್ಲಾ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು
ಒದಗಿಸುವುದು.
2) ಸಂವಿಧಾನದಲ್ಲಿ ಮಹಿಳೆಯರಿಗೆ ನೀಡಿದ ಪ್ರತಿಶತ 33 ರಷ್ಟನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತಂದು, ಮಹಿಳೆಯರ
ಸಮಸ್ಯೆಗಳಿಗೆ ಸ್ಪಂದಿಸುವುದು.
3) ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಿನಂತೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು.
4) ನೂತನ ಕೈಗಾರಿಕೆಗಳನ್ನು ಸ್ಥಾಪಿಸಿ, ಯುವಕರಿಗೆ ಉದ್ಯೋಗ ಸೃಷ್ಟಿಸುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವುದು.
5) ಕ್ಷೇತ್ರದಲ್ಲಿ ಉನ್ನತ ಮಟ್ಟದ (ಹೈಟೆಕ್) ಆಸ್ಪತ್ರೆ ನಿರ್ಮಿಸಿ, ಜನರ ಆರೋಗ್ಯದ ಗುಣಮಟ್ಟ ಹೆಚ್ಚಿಸುವುದು.
6) ದೇಶದಲ್ಲಿ ಸಂಪೂರ್ಣ ಮಧ್ಯಪಾನ ನಿಷೇಧಿಸಿ, ಜನರ ಹಿತ ಕಾಪಾಡುವುದು.
7) ಮಹಿಳೆಯರಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಕೈಗಾರಿಕಾ ಕ್ಷೇತ್ರಗಳಲ್ಲಿ ಪ್ರಾಶಸ್ತ್ಯ ನೀಡಿ ಸಬಲೀಕರಣಗೊಳಿಸುವುದು.
8) ರೈತರಿಗೆ ಹೆಚ್ಚಿನ ಇಳುವರಿಯ ಬೀಜ ವಿತರಣೆ ಮಾಡುವುದು,ಸಾವಯವ ಗೊಬ್ಬರ ಮತ್ತು ನೀರಾವರಿ, ಒಣಬೇಸಾಯದಲ್ಲಿ ಬೃಹತ್
ಕೆರೆಗಳನ್ನು ನಿರ್ಮಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಬೋರ್‍ವೆಲ್‍ಗಳನ್ನು ಕೊರೆಯಿಸಿ, ರೈತರಿಗೆ ನೀರಿನ ಸೌಲಭ್ಯ ಕಲ್ಪಿಸುವುದು.
9) ರೈತರು ಬೆಳೆದ ಬೆಳೆಗೆ ಸಕಾಲದಲ್ಲಿ ಬೆಂಬಲ ಬೆಲೆ ನಿಗದಿಪಡಿಸಿ,ರೈತರಿಗೆ ನ್ಯಾಯಸಿಗುವಂತೆ ಮಾಡುವುದು.
10) ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಕದವರೆಗೆ ಹಾಗೂ ವೃತ್ತಿಪರ ಶಿಕ್ಷಣ ಒದಗಿಸುವುದಲ್ಲದೇ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು.
11) ಅಂಗವಿಕಲ, ವೃದ್ಧಾಪ್ಯವೇತನ, ವಿಧವಾ ವೇತನ, ಸಂಧ್ಯಾಸುರಕ್ಷಾ ಯೋಜನೆಯಡಿ ನೀಡಲಾಗುತ್ತಿರುವ ಪಿಂಚಣಿ ಮೊತ್ತವನ್ನು ಹೆಚ್ಚಿಸುವುದು ಹಾಗೂ ಫಲಾನುಭವಿಗಳ ಖಾತೆಗೆ
ನೇರವಾಗಿ ಜಮಾ ಆಗುವಂತೆ ಕ್ರಮ ಜರುಗಿಸಲಾಗುವುದು.
12) ವಿಶೇಷವಾಗಿ ಮಾಜಿ ಸೈನಿಕರು, ರಾಜ್ಯದ ನಿವೃತ್ತ ನೌಕರರಿಗೆ ಆರೋಗ್ಯ ಸೌಲಭ್ಯಗಳಿಗೆ ಅನುದಾನ ಮೀಸಲಿರಿಸಲಾಗುವುದು.
13) ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಹಾಗೂ ವ್ಯಾಪಾರಿಗಳಿಗೆ ಹಣಕಾಸು ಸಂಸ್ಥೆಗಳಿಂದ ರಿಯಾಯಿತಿಯಲ್ಲಿ
ಸಾಲಸೌಲಭ್ಯಗಳಿಂದ ಆರ್ಥಿಕ ನೆರವು ಕಲ್ಪಿಸುವುದಲ್ಲದೇ, ಜೀವ ವಿಮೆ ಮಾಡಿಸಿ, ಅವರ ಕುಟುಂಬಕ್ಕೆ ಭದ್ರತೆ ಒದಗಿಸುವುದು.
14) ಐತಿಹಾಸಿಕ, ಧಾರ್ಮಿಕ ಪ್ರವಾಸಿ ಕ್ಷೇತ್ರಗಳಲ್ಲಿ ವಿಶೇಷ ಸ್ಥಳಗಳನ್ನು ಗುರುತಿಸಿ, ಜೀರ್ಣೋದ್ಧಾರ ಮಾಡಿಸಿ,ಅಭಿವೃದ್ಧಿಪಡಿಸುವುದು.


ಈ ಸಂದರ್ಭದಲ್ಲಿ ಭಾರತೀಯ ಪ್ರಜಾ ಐಕ್ಯತಾ ಪಕ್ಷದ ಪ್ರಚಾರ ಸಮಿತಿಯ ಸದಸ್ಯರಾದ ವಿ. ವೆಂಕಟೇಶ್ವರರಾವ್ ಕಾರಟಗಿ, ಕೃಷ್ಣಯ್ಯ
ಶ್ರೇಷ್ಠಿ, ಆರ್.ಪಿ ಪಾಟೀಲ್, ಶರಣಗೌಡ ಕಾರಟಗಿ, ಪಂಪಯ್ಯಸ್ವಾಮಿ,
ಅಂಜಿನೆಪ್ಪ, ರಾಮಣ್ಣ, ಯಲ್ಲಪ್ಪ, ಅಂಬಣ್ಣ, ಸಾಲಿಗಂಗಣ್ಣ, ಇತರರರು ಇದ್ದರು.

error: Content is protected !!