
ಗಂಗಾವತಿ: ಗಂಗಾವತಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ನಗರದಲ್ಲಿ ನಡೆಯಲಿರುವ ೮ನೆಯ ಗಂಗಾವತಿ ತಾಲೂಕ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ
ಸಿ,ಎಚ್ ನಾರಿನಾಳರವರನ್ನು ಕನ್ನಡ ಪರ ಸಂಘಟನೆಯ ಒಕ್ಕೂಟದಿಂದ ಅವರನ್ನು ಗಂಗಾವತಿ ನಗರದಲ್ಲಿರುವ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ,ಎಚ್,ನಾರನಾಳ ಕನ್ನಡ ಭಾಷೆ, ನೆಲ,ಜಲ ಸಮಸ್ಯೆ ಬಂದಾಗ ಹೋರಾಟ ಮಾಡಬೇಕು ಎಂದು ಹೇಳಿದರು. ಈ ಭಾಷೆ ನಾಶಿಸಿ ಹೋಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಆಳುವ ವರ್ಗ ಕನ್ನಡ ಭಾಷೆಯನ್ನು ಮಾರಿಕೊಳ್ಳತ್ತೆದೆ ಅದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ನೇರವಾಗಿ ನಿಷ್ಠುರ ಲೇಖನಗಳನ್ನು ಬರೆಯಬೇಕು, ಅವಾಗ ವ್ಯಕ್ತಿ ಜನರ ಮನದಲ್ಲಿ ಎತ್ತರಕ್ಕೆ ಬೆಳೆಯುತ್ತಾರೆ.ಕನ್ನಡ ನಾಡಿಗಾಗಿ ಎಷ್ಟು ಜನ್ಮ ಎತ್ತಿದ್ದರು ಸಾಲಲ ಎಂದು ತಿಳಿಸಿದರು. ಕರ್ನಾಟಕ ನಾಡಿನಲ್ಲಿ ಹುಟ್ಟುವುದೆ ಪುಣ್ಯ.. ಹಸಿರು ಬೀಡು ಶ್ರೀಗಂಧದ ನಾಡು ಈ ನಮ್ಮ ಕನ್ನಡ ನಾಡು ಎಂದು ಹೇಳಿದರು.ಈ ಸಂದರ್ಭಗಳಲ್ಲಿ.,ಪಂಪಣ್ಣ ನಾಯಕ,ಬಳ್ಳಾರಿ ರಾಮಣ್ಣ ನಾಯಕ ವಿರೂಪಾಕ್ಷಿ ಗೌಡ ನಾಯಕ,ಅರ್ಜುನ ನಾಯಕ ಚನ್ನಬಸವ ಜೇಕಿನ,ದುರಗಪ್ಪ ನಡಲಮನೆ,ರಮೇಶ್ ಕೋಟೆ,ಶಂಭುನಾಥ ದೊಡ್ಮನಿ, ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾಧ್ಯಕ್ಷ ಮರಿಸ್ವಾಮಿ ಸಿ,ಕೆ.ಲಕ್ಷ್ಮಿಪತಿ,ಇತರರು ಇದ್ದರು.
ಕನ್ನಡಪರ ಸಂಘಟನೆಗಳನ್ನು ಕಡೆಗಣಿ: ಆಕ್ರೋಶ
ಗಂಗಾವತಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಸಿ ಎಚ್,ನಾರನಾಳರವರನ್ನು ಅಯ್ಕೆ ಮಾಡಿರುವುದು ಸಂತಸ,ಅದರೆ ಅಯ್ಕೆ ಮಾಡವಾಗ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದು ನಮ್ಮ ಗಮನಕ್ಕೆ ಇಲ್ಲ ಇದು ಬೇಸರ ಸಂಗತಿ ಎಂದು ಕನ್ನಡ ಪರ ಸಂಘಟನೆ ಮುಖಂಡರು ಕಸಾಪ ಅಧ್ಯಕ್ಷರಿಗೆ ತಿರಗೇಟು ನೀಡಿದರು. ಇಲ್ಲಿ ಕನ್ನಡಕ್ಕಾಗಿ ಹೋರಾಟ ಮಾಡವವರನ್ನು ದೂರ ತಳ್ಳುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಪರ ಸಂಘಟನೆಗಳನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದರು.