ಬಳ್ಳಾರಿ ನಗರದಲ್ಲಿ ಹಾಡು ಹಗಲೇ 30 ಜನರಿಗೆ ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ್ದು ಮಹಾನಗರ ಪಾಲಿಕೆ ಬೀದಿ ನಾಯಿಗಳನ್ನು ತಡೆಗಟ್ಟಲಿಕ್ಕಾಗಿ ಕೋಟಿಗಟ್ಟಲೆ ಹಣವು ಇದ್ದು ಈ ಹಣವನ್ನು ಸರಿಯಾಗಿ ಬಳಕೆ ಮಾಡಲಾರದೆ ಬೀದಿ ನಾಯಿಗಳ ಸಂತಾನ ಹರಣ ಹೆಸರಿನಲ್ಲಿ ಅವ್ಯವಾರ ಭ್ರಷ್ಟಾಚಾರ ನಡೆದಿದ್ದರಿಂದ ಸೂಕ್ತ ತನಿಖೆ ಮಾಡಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸುವ ಕುರಿತು

   ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ದಲಿತರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ಈಗ ತಮ್ಮ ಗಮನಕ್ಕೆ ತಂದು ಮನವಿ ಮಾಡಿಕೊಳ್ಳುವುದೆನೆಂದರೆ.

ಬಳ್ಳಾರಿ ಮಹಾನಗರ ಪಾಲಿಕೆಗೆ ಸರ್ಕಾರದಿಂದ ಬೀದಿ ನಾಯಿಗಳನ್ನು ತಡೆಗಟ್ಟಲಿಕ್ಕಾಗಿ ಕೋಟಿ ಗಟ್ಟಲೆ ಹಣವು ಮಂಜೂರಿಯಾಗಿ ಬಂದಿದ್ದು ಈ ಹಣವನ್ನು ಬೀದಿ ನಾಯಿಗಳ ಸಂತಾನ ಹರಣ ಹಾಗೂ ಲಸಿಕೆಗಾಗಿ ಸರಿಯಾದ ರೀತಿಯಲ್ಲಿ ಮಾಡಲಾರದೆ ಇದ್ದು ಈ ಹಣವನ್ನು ವಿಪರೀತವಾಗಿ ಯದ್ವ ತದ್ವ ಖರ್ಚು ಮಾಡುತ್ತಿರುವುದು ಒಂದು ಕಡೆಯಾದರೆ ಬೀದಿ ನಾಯಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿರುವುದರಿಂದ ಬಳ್ಳಾರಿ ನಗರದಲ್ಲಿ ಬೀದಿ ನಾಯಿಗಳ ಗುಂಪು ಗುಂಪಾಗಿ ಸಾರ್ವಜನಿಕರ ಮೇಲೆ ಹಾಡು ಹಗಲೇ ದಾಳಿ ಮಾಡಿ 30 ಜನರ ಮೇಲೆ ದಾಳಿ ಮಾಡಿದ್ದಲ್ಲದೆ  ಕಚ್ಚಿದ್ದರಿಂದ ಕೆಲವರು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅಡ್ಮಿಟ್ ಆಗಿದ್ದು ಇಷ್ಟೆಲ್ಲಾ ನಿರಂತರವಾಗಿ ನಡೆಯುತ್ತಿರುವುದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಇದರ ಬಗ್ಗೆ ಸಂಪೂರ್ಣವಾಗಿ ಗೊತ್ತಿದ್ದರೂ ಸುಮ್ಮನೆ ಇರುತ್ತಿರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳಲೆಂದು ಬಳ್ಳಾರಿ ನಗರದ ಸಾರ್ವಜನಿಕರು ಸುಮಾರು ಸಾರಿ ದೂರು ನೀಡಿದರು.

ಸಹ ಬೀದಿ ನಾಯಿಗಳನ್ನು ತಡೆಗಟ್ಟುವಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಇದ್ದು ಇಲ್ಲದಂತಾಗಿದೆ ಇದರಿಂದ ಸಾರ್ವಜನಿಕರಿಗೆ ಈ ರೀತಿಯಾಗಿ ಬೀದಿ ನಾಯಿಗಳು ಕಚ್ಚಿ ದಾಳಿ ಮಾಡಿದ್ದರೂ ಸಹ ಅಧಿಕಾರಿಗಳು ನಗರದಲ್ಲಿ ಸಾರ್ವಜನಿಕರಿಗೆ  ಕಚ್ಚಿದರೆನು ಬಿಟ್ಟರೇನು  ಬೇಜವಾಬ್ದಾರಿ ಮನೋಭಾವನೆಯಿಂದ ಕೂಡಿದ್ದು.

ಇವರು ಎಚ್ಚೆತ್ತುಕೊಳ್ಳುತ್ತಿಲ್ಲ ಬೀದಿ ನಾಯಿಗಳ ಸಂತಾನ ಹರಣ ಮತ್ತು ಲಸಿಕೆ ಹೆಸರಿನಲ್ಲಿ ಹಣವನ್ನು ಯದ್ವಾ ತದ್ವಾ ಖರ್ಚು ಮಾಡಿ ಕೆಲವು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಇದರಲ್ಲಿ ಅವ್ಯವಾರ ಮತ್ತು ಭ್ರಷ್ಟಾಚಾರ ಎಸಗಿದ್ದರಿಂದ  ಜಿಲ್ಲಾಧಿಕಾರಿಗಳಿಗೆ ಇದರ ಬಗ್ಗೆ ಕೂಡಲೇ ಕುಲಂಕುಶವಾಗಿ ದಕ್ಷ ಅಧಿಕಾರಿಗಳಿಂದ ತನಿಖೆ ಮಾಡಿ ತಪ್ಪಿಸ್ತಸ್ಥ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕೆಂದು ಕರ್ನಾಟಕ ದಲಿತರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ದಿನಾಂಕ 16/2/  2013 ರಂದು ಜಿಲ್ಲಾಧಿಕಾರಿಗಳಲ್ಲಿ ದೂರು ನೀಡಿ ಮನವಿ ಮಾಡಿಕೊಳ್ಳಲಾಗಿದೆ.

error: Content is protected !!