ಗಂಗಾವತಿ: ಮಾರ್ಚ 6 ಮತ್ತು 7 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ನ 8ನೇ ತಾಲೂಕಾ ಸಮ್ಮೇಳನದ ಲಾಛನ ಬಿಡುಗಡೆಯನ್ನು ಶಾಸಕ ಪರಣ್ಣ ಮುನವಳ್ಳಿ ಶನಿವಾರ ನೆರವೇರಿಸಿದರು. ನಂತರ ಶಾಸಕರು ಮಾತನಾಡಿ, ತಾಲೂಕಾ ಸಮ್ಮೇಳನದ ಲಾಛನ ಬಿಡುಗಡೆ ಮಾಡಲಾಗಿದೆ.

ಲಾಛನದಲ್ಲಿ  ತಾಲೂಕಿನ ಐತಿಹಾಸಿಕ ಸ್ಥಳಗಳನ್ನು ಒಳಗೊಂಡ ಅಂಜನಾದ್ರಿ ಪರ್ವತ, ತುಂಗಭದ್ರ ನದಿ, ತಾಯಿ ಭುವನೇಶ್ವರ ದೇವಿ, ಭತ್ತದ ಕಣಜ, ಮೋರೆರ ಚಿತ್ರ, ಕುಮಾರರಾಮನ ಕೋಟೆಯ ದೇವಸ್ಥಾನ ಸೇರಿದಂತೆ ಇತರೆ ಸ್ಥಳಗಳನ್ನು ಸೇರಿಸಲಾಗಿದೆ. ತಾಲೂಕ  ಸಮ್ಮೇಳನ ಸಂಭ್ರಮದಿಂದ  ಅಚರಿಸಲು ಸಿದ್ದತೆ ಮಾಡಲಾಗುತ್ತಿದೆ.

ಸಕಲ ಕನ್ನಾಡಿಮಾನಿಗಳು ಸಮ್ಮೇಳನ ಸಹಕರಿಸುವಂತೆ ತಿಳಿಸಿದರು. ಈ ವೇಳೆ ಕಸಪಾ ಜಿಲ್ಲಾಧ್ಯಕ್ಷ ಶರಣೇಗೌಡ ಮಾಲೀಪಾಟೀಲ್, ತಾಲೂಕಾ ಅಧ್ಯಕ್ಷ ಶ್ರೀನಿವಾಸ ಅಂಗಡಿ, ಸಾಹಿತ್ಯ ಪರಿಷತ್ ನ ಸದಸ್ಯರಾದ ಮಹೇಶ ಕುಮಾರ, ಉಮೇಶ ಸಿಂಗನಾಳ, ಶೇಖನಬಿಸಾಬ, ಶ್ರೀನಿವಾಸ ಎಂ.ಜೆ, ಶ್ರೀದೇವಿ ಕೃಷ್ಣಪ್ಪ, ರುದ್ರೇಶ ಆರಾಳ, ಮಾರುತಿ ಐಲಿ,ವಿರುಪಾಕ್ಷಪ್ಪ ಶಿರವಾರ, ಮಹೇಶ ಸಿಂಗನಾಳ, ಚಂದ್ರಶೇಖರ ಅಕ್ಕಿ ಸೇರಿದಂತೆ ಅನೇಕರು ಇದ್ದರು.

error: Content is protected !!