ಕೊಪ್ಪಳ :ಗಂಗಾವತಿ ವಿಧಾನಸಭಾ ಕ್ಷೇತ್ರದ ಆನೆಗುಂದಿ, ಸಣಾಪುರ ಮತ್ತು ಮಲ್ಲಾಪುರ ಪಂಚಾಯತ್ ವ್ಯಾಪ್ತಿಯ ರೆಸಾರ್ಟ್ ಗಳ ಮಾಲೀಕರನ್ನು ಬಿಜೆಪಿ ಸರ್ಕಾರ ತನ್ನ ಚುನಾವಣೆಯ ದಾಳವನ್ನಾಗಿ ಬಳೆಸಿಕೊಳ್ಳುತ್ತಿದೆ, ಒಂದು ಕಡೆ ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳೆಸುವುದು ಕೂಡ ಸರ್ಕಾರದ ಗುರಿಗಳಲ್ಲಿ ಒಂದು ಎಂದು ಬೀಗುತ್ತಿರುವ ಬಿಜೆಪಿ ಸರ್ಕಾರ ಇನ್ನೊಂದು ಕಡೆಗೆ ಚುನಾವಣೆ ಹತ್ತಿರ ಬಂದಂತೆ ಈ ಭಾಗದ ರೆಸಾರ್ಟ್ ಮಾಲೀಕರಿಗೆ ನೋಟಿಸ್ ನೀಡುವುದು ,ತೆರವುಗೊಳಿಸಲು ಕ್ರಮ ತೆಗೆದುಕೊಳ್ಳುವುದು, ಇತ್ಯಾದಿ ಮಾಡುವ  ಮೂಲಕ ಪ್ರವಾಸೋದ್ಯಮವನ್ನು ಗಂಗಾವತಿಯಲ್ಲಿ ಚಿವುಟುತ್ತಿದೆ.

ಇದು ಬಿಜೆಪಿ ಸರ್ಕಾರದ ಇಬ್ಬಗೆಯ ನೀತಿಯನ್ನು ತೋರಿಸುವುದು ಅಷ್ಟೇ ಅಲ್ಲ ಅದರ ಎಡಬಿಡಂಗಿತನವನ್ನು ಸಹ ಎತ್ತಿ ತೋರಿಸುತ್ತದೆ.     

ಇದೇ ರೀತಿಯಲ್ಲಿ ಹಿಂದೆಯೂ ಇಕ್ಬಾಲ್ ಅನ್ಸಾರಿ ಅವರು ಗಂಗಾವತಿಯ ಶಾಸಕರಾಗಿದ್ದಾಗ ಈ ರೆಸಾರ್ಟ್ ಮಾಲೀಕರನ್ನು ತೆರವುಗೊಳಿಸಲು ನೋಟಿಸ್ ನೀಡುವುದು ,ನೀರು, ಕರೆಂಟ್ ನಿಲ್ಲಿಸುವುದು ಇತ್ಯಾದಿ ನಾಟಕವಾಡಿ ಆ ಮೂಲಕ ಚುನಾವಣೆಗೆ ದಾಳವನ್ನಾಗಿ ಬಳಸಿಕೊಂಡಿದ್ದರು.

ಈಗಲೂ ಇದೇ ರೀತಿಯಲ್ಲಿ ಈಗಿನ ಶಾಸಕ ಪರಣ್ಣ ಮನವಳ್ಳಿ ಅವರು ಸಹ ಚುನಾವಣೆ ಹತ್ತಿರ ಬಂದಂತೆ ಈ ಭಾಗದ ರೆಸಾರ್ಟ್ ಮಾಲೀಕರನ್ನು ಪುನಃ ಇದೇ ರೀತಿಯ ದಾಳವನ್ನಾಗಿ ಬಳಸಿ ಕೊಳ್ಳುವ ತಂತ್ರವನ್ನು ಅನುಸರಿಸಲು ಮುಂದಾಗಿದ್ದಾರೆ.

ಸಾವಿರಾರು ಬಡವರ ಮತ್ತು ಕೂಲಿ ಕಾರ್ಮಿಕರ ಜೀವನಧಾರವಾಗಿರುವ ಈ ಭಾಗದ ರೆಸಾರ್ಟ್ಗಳ   ಅಧಿಕೃತತೆಯ ಪರವಾನಗಿಯ ಕುರಿತು ಶಾಶ್ವತ ಪರಿಹಾರವನ್ನು ಕಲ್ಪಿಸುವಲ್ಲಿ ಯಾವ ಶಾಸಕರೂ ಇದುವರೆಗೂ ಮುಂದಾಗಿಲ್ಲ, ಮತ್ತು ಈ ರೀತಿಯ ಯೋಚನೆಯನ್ನು ಹಾಗೂ ಪ್ರಯತ್ನವನ್ನು ಮಾಡದೆ ಇರುವುದು ತುಂಬಾ ವಿಷಾದಕರ ಸಂಗತಿ.ಬದಲಿಗೆ ಅವರನ್ನು ಚುನಾವಣೆ ಸಮಯದಲ್ಲಿ ತಮಗೆ ಬೇಕಾದಂತೆ ಚುನಾವಣೆ ಯ ದಾಳವನ್ನಾಗಿ ಬಳಸಿ ಕೊಳ್ಳುತ್ತಾ ಬಂದಿದ್ದಾರೆ.ಹೀಗಾಗಿ ಗಂಗಾವತಿಯು ಪ್ರವಾಸೋದ್ಯಮದಲ್ಲಿ ಅಭಿವೃದ್ಧಿಯಾಗುವುದು ಹೇಗೆ? ಹಾಗಾಗಿ ಬಿಜೆಪಿ ಸರ್ಕಾರ ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಹೇಳುವುದು ನೂರಕ್ಕೆ ನೂರು ಶುದ್ಧ ಸುಳ್ಳು.ಪ್ರವಾಸೋದ್ಯಮದಲ್ಲಿ ಗಂಗಾವತಿಯ ಅಭಿವೃದ್ಧಿಗೆ ತಮ್ಮ ಸ್ವಾರ್ಥದ ಕಾರಣಕ್ಕೆ ಅಡ್ಡಗಲಾಗುತ್ತಿರುವ ಇಂತಹ ಶಾಸಕರಿಗೆ ಗಂಗಾವತಿಯ ಪ್ರವಾಸೋದ್ಯಮ ಪ್ರೇಮಿಗಳು ಈ ರೆಸಾರ್ಟ್ ಗಳ ಮಾಲೀಕರು ಮತ್ತು ಅವರ ಕುಟುಂಬ , ಹಾಗೂ ರೆಸಾರ್ಟ್ ನಂಬಿಕೊಂಡು ಕುಳಿತಿರುವ ಸಾವಿರಾರು ಕೂಲಿ ಕಾರ್ಮಿಕರು ಮತ್ತು ಬಡವರು ಮುಂದಿನ ಚುನಾವಣೆಗಳಲ್ಲಿ ತಕ್ಕ ಉತ್ತರವನ್ನು ನೀಡಲಿದ್ದಾರೆ- ಎಂದು ಆಮ್ ಆದ್ಮಿ ಪಾರ್ಟಿಯ ಗಂಗಾವತಿ ವಿಧಾನಸಭಾ ಕ್ಷೇತ್ರದ MLA ಸೇವಾಕಾಂಕ್ಷಿ ಹಾಗೂ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಶರಣಪ್ಪ ಸಜ್ಜಿಹೊಲ ಕಿಡಿ ಕಾರಿದ್ದಾರೆ .

error: Content is protected !!