ಗಂಗಾವತಿ: ದಿನಾಂಕ 18.5.2024 ರಂದು ಶಿವಾಜಿನಗರದ ಶಾಮ್ಸ್ ಕಲ್ಯಾಣ ಮಂಟಪ ಬೆಂಗಳೂರಿನಲ್ಲಿ ಕಾರ್ಯನಿರತ ಛಾಯಾಗ್ರಹಕನ ಮೇಲೆ ಶುಲ್ಲಕ ಕಾರಣದಿಂದ ಮದುವೆ ಸಮಾರಂಭದ ವಧುವಿನ ಅಣ್ಣ ಮತ್ತು ತಮ್ಮ ಸೇರಿಕೊಂಡು ಸಿಕ್ಕಾಪಟ್ಟಿ ಹೋಡೆದು ಮಾರಣಾಂತಿಕ ಹಲ್ಲೆ ನಡೆದಿದ್ದು, ಇವರ ಮೇಲೆ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಜರುಗಿಸಿ ನ್ಯಾಯವನ್ನು ಕೊಡಿಸಬೇಕೆಂದು ಗಂಗಾವತಿ ತಾಲೂಕು ಫೋಟೋಗ್ರಾಫರ್ ಮತ್ತು ವಿಡಿಯೋ ಗ್ರಾಫರ್ಸ್ ಸಂಘ ವತಿಯಿಂದ ತಹಶೀಲ್ದಾರರಿಗೆ ಮನವಿ ಪತ್ರ ನೀಡಲಾಯಿತು.
ಮದುವೆ ಕಾರ್ಯಕ್ರಮಗಳಿಗೆ ಫೋಟೋಗ್ರಾಫರ್ ಗಳು ಹೋದಾಗ ಸಣ್ಣಪುಟ್ಟ ಗಲಾಟೆಗಳನ್ನೇ ದೊಡ್ಡದಾಗಿ ಬಿಂಬಿಸಿಕೊಂಡು, ಅವರ ಸಾಮಗ್ರಿಗಳನ್ನು ನಷ್ಟ ಪಡಿಸುವಂತಹ ಕೆಲಸವನ್ನು ಯಾರೇ ಮಾಡಿದರು ಅಂತವರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಜರುಗಿಸಬೇಕು ಮತ್ತು ತಪ್ಪಿಸ್ಥರ ಮೇಲೆ ಪ್ರಕರಣ ದಾಖಲಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಕೊಟ್ಟರು.
ಫೋಟೋಗ್ರಾಫರ್ ರಘು ಹಾಗೂ ಜಯಂತ್ ಇವರು ಶಿವಾಜಿನಗರದ ಶಾಮ್ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಮದುವೆಯ ಶುಭ ಕಾರ್ಯಕ್ರಮದಲ್ಲಿ ಫೋಟೋ ಗ್ರಾಫಿಕ್ ಮಾಡುತ್ತಿರುವಾಗ ಕ್ಷುಲ್ಲಕ ಕಾರಣದಿಂದ ಮದುವೆ ಮನೆಯವರು ಈ ರೀತಿ ಹಲ್ಲೇ ಮಾಡಿರುವುದು ಶೋಭೆ ತರುವಂತಹದಲ್ಲ ಹಾಗಾಗಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಗಂಗಾವತಿ ತಾಲೂಕ ಫೋಟೋಗ್ರಾಫರ್ ಮತ್ತು ವಿಡಿಯೋ ಗ್ರಾಫರ್ ಸಂಘ ಎಂದು ಮನವಿಯನ್ನು ಸಲ್ಲಿಸಿದೆ.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರ ಶ್ರೀಕಾಂತಸಾ ರಾಯಭಾಗಿ, ಅಧ್ಯಕ್ಷರ ಚಾಂದಪಾಷ ,ಉಪಾಧ್ಯಕ್ಷ ನಾಗರಾಜ್ ಉಪ್ಪಿ, ಕಾರ್ಯದರ್ಶಿ ವಿರುಪಾಕ್ಷಿ, ಖಜಾಂಚಿ ಹುಸೇನ್ ಬಂಡ್ರಾಳ , ನಾಗರಾಜ್ ಲ್ಯಾಮಿನೆಷನ್ ಮತ್ತು ಸಂಘದ ಸರ್ವ ಸದಸ್ಯರು ಸೇರಿದಂತೆ ಇತರರು ಇದ್ದರು