

ಕೊಪ್ಪಳ :ಗಂಗಾವತಿ ನಗರದ ಬಸ್ ನಿಲ್ದಾಣದ ಮುಂದಿರುವ ಶ್ರೀಕೃಷ್ಣದೇವರಾಯ ಉದ್ಯಾನವನವು ಸರಿಯಾದ ಕಾಂಪೌಂಡ್ ಇಲ್ಲದೇ ಆ ಉದ್ಯಾನವು ಪುಂಡರಿಗೆ, ಕುಡುಕರಿಗೆ, ಪೋಲಿಗಳಿಗೆ ಹೇಳಿ ಮಾಡಿಸಿದಂತ್ತಿದ್ದು ಅವರೆಲ್ಲಾ ಮಾಡುವ ಎಲ್ಲಾ ಕಾರ್ಯಗಳು ಉದ್ಯಾನವನವನ್ನು ನಾಶ ಮಾಡುವಂತಿದ್ದು ಹಾಗೂ ಸಾರ್ವಜನಿಕರ ಹಿತಾಸಕ್ತಿಗೆ ದಕ್ಕೆ ತರುವಂತಿದ್ದವು
ಅದಕ್ಕಾಗಿ ನಗರದ 30ನೇ ವಾರ್ಡಿನ ನಗರ ಸಭೆ ಸದಸ್ಯರಾದ ಸುಚೇತ ಶಿರಗೇರಿ ಹಾಗೂ ನಾಗರಿಕರೆಲ್ಲರು ಕೂಡಲೇ ಇದಕ್ಕೆ ಕ್ರಮವಹಿಸಿ ಕಾಂಪೌಂಡ್ ಕಟ್ಟಿಸಿಕೊಡಬೇಕು ಹಾಗೂ ಬೆಳಿಗ್ಗೆ ಎರಡು ಗಂಟೆ ಸಂಜೆ ಎರಡು ಗಂಟೆ ಉದ್ಯಾನವು ಸಾರ್ವಜನಿಕ ಉಪಯೋಗಕ್ಕೆ ಸಿಗುವಂತೆ ಏನಾದರು ನಿರ್ಣಯ ತೆಗೆದುಕೊಳ್ಳಬೇಕು ಎಂದು


ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರ ಬಳಿ ಮನವಿ ಮಾಡಿಕೊಂಡರು.
ಈ ಸಂಧರ್ಭದಲ್ಲಿ ನಗರಸಭೆ ವಿರೋದ ಪಕ್ಷದ ನಾಯಕರಾದ ನವೀನ ಮಾಲಿಪಾಟೀಲ್, ನಗರಸಭೆ ಸದಸ್ಯರಾದ ವಾಸುದೇವ ನವಲಿ, ರಮೇಶ ಚೌಡಕಿ, ಪರಶುರಾಮ ಮಡ್ಡೇರ್, ಶರಭೋಜಿ ಗಾಯಕ್ವಾಡ್, ಉಮೇಶ್ ಸಿಂಗನಾಳ, ವೆಂಕಟರಮಣ, ನೀಲಕಂಠ ಕಟ್ಟಮನಿ, ಅಮರ್ ಸಿಂಗ್, ಅಮರೆಗೌಡ, ಮುಖಂಡರಾದ ಸಂತೋಷ್ ಕೆಲೋಜಿ, ರಾಚಪ್ಪ ಸಿದ್ದಾಪುರ, ರವಿ ವೆಲ್ಲಂಕಿ, ಮುಂತಾದವರು ಉಪಸ್ಥಿತರಿದ್ದರು.