
8ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಂಗೀಣ ಅಧ್ಯಕ್ಷರಾದ ಶಿಕ್ಷಕರು ಸಾಹಿತಿಗಳು ಪತ್ರಕರ್ತರಾದ ಸಿ.ಎಚ್. ನಾರಿನಾಳ” ರವರಿಗೆ ಹುಲಿಗೇಶ ದೇವರಮನಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು
ಕೊಪ್ಪಳ :ಗಂಗಾವತಿ ಎಂಟನೇ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸರ್ವಧಕ್ಷರಾಗಿ ಆಯ್ಕೆಗೊಂಡ ನಿವೃತ್ತ ಶಿಕ್ಷಕ ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಸಿಹೆಚ್.ನಾರಿನಾಳ ಅವರನ್ನು ಹುಲಿಗೇಶ ದೇವರಮನಿ ನೇತೃತ್ವದಲ್ಲಿ ಆತ್ಮೀಯವಾಗಿ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿದರು,


ಈ ಸಂದರ್ಭದಲ್ಲಿ ಹುಲಿಗೇಶ ದೇವರಮನಿ ಮಾತನಾಡಿ: ಗಂಗಾವತಿ ಎಂಟನೇ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸರ್ವಧ್ಯಕ್ಷರಾಗಿ ಆಯ್ಕೆಗೊಂಡ ನಿವೃತ್ತ ಶಿಕ್ಷಕ ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಸಿ ಎಚ್ ನಾರಿನಾಳ ಇವರನ್ನು ಆಯ್ಕೆ ಮಾಡಿರುವುದು ನಮಗೆ ಸಂತಸದ ವಿಷಯ ಎಂದು ಹೇಳಿ ಇವರನ್ನು ಸನ್ಮಾನಿಸಿ ಕುಶಲೋಪರಿ ವಿಚಾರಿಸಿದರು.
ನಂತರ ಮಲ್ಲೇಶ ದೇವರಮನಿ ಮಾತನಾಡಿ : ಸಿ ಎಚ್ ನಾರಿನಾಳ ಇವರು ಶಿಕ್ಷಣ ಕ್ಷೇತ್ರದಲ್ಲಿ ಸಾಹಿತಿ ಕ್ಷೇತ್ರದಲ್ಲಿ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದನ್ನು ಗುರುತಿಸಿ ಇವರನ್ನು ಗಂಗಾವತಿಯ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೋಮನಾಥ ಭಂಡಾರಿ ನಗರಸಭೆ ಸದಸ್ಯರು,ದುರುಗಪ್ಪ ಐಹೊಳೆ, ಅಂಬ್ರೇಶ ಹಂಪಿ, ದೇವು ಜಂತಕಲ್, ಪಂಪಪಾತಿ ಸಿದ್ದಾಪುರ,ಶಂಕರ ಸಿದ್ದಾಪುರ, ಉಪಸ್ಥಿತರಿದ್ದರು.