ಶ್ರೀಮತಿ ಕರೀನಾ ಬೇಗಂ ಗಂಡ ಖಾಜಾಸಾಬ ಜಾತಿ– ಮುಸ್ಲಿಂ, ವಯಸ್ಸು : 40 ವರ್ಷ, ಉದ್ಯೋಗ : ಕೂಲಿ ವಾರ್ಡ ನಂ. 14, ಸಂಗಮೇಶ್ವರಕ್ಯಾಂಪ್‌, ವಡ್ಡರಹಟ್ಟಿ ಈ ಮೂಲಕ ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ,

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವಡ್ಡರಹಟ್ಟಿ 4ನೇ ವಾರ್ಡ ಸಂಗಮೇಶ್ವರಕ್ಯಾಂಪ್ ನಿವಾಸಿಯಾಗಿದ್ದು, 2021-22ನೇ ಸಾಲಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಸವ ವಸತಿ ಯೋಜನೆ ಅಡಿಯಲ್ಲಿ 128 ಮನೆಗಳು ಮಂಜೂರಾಗಿದ್ದು, ಗ್ರಾಮ ಪಂಚಾಯತ್ ಸದಸ್ಯರಾದ ಸೈಯದ್ ಮೇರಾಜ್ ತಂದೆ ಸೈಯದ್‌ ಸಾಬ ಕಿಲ್ಲೀದ‌ ಮತ್ತು ಹೊನ್ನೂರಬೀ ಗಂಡ ಮದರ್‌ ಸಾಬ್ ಮತ್ತು ಶ್ರೀಮತಿ ಗಂಗಮಾಳಾಮ ಗಂಡ ನಿಂಗಪ್ಪ ಅಧ್ಯಕ್ಷರ ಸಹೋದರಾದ ಶಿವಪುತ್ರಪ್ಪ ಇವರು ಆರಾಳ ಗ್ರಾಮದಲ್ಲಿ ಅಲ್ಪಸಂಖ್ಯಾತರ ಮನೆ ಇದ್ದು, ನಿಮಗೆ ಮನೆ ನೀಡಬೇಕಾದರೆ ರೂ.30,000/- ಹಣವನ್ನು ನೀಡಿದರೆ ನಿಮಗೆ ಮನೆ ನೀಡುತ್ತಾರೆ ಎಂದು ತಿಳಿಸಿರುತ್ತಾರೆ.

ಸೈಯದ್‌ ಮೇರಾಜ್‌ರವರು ಆಲ್ದಾಳ ಗ್ರಾಮದ ಸದಸ್ಯರಾದ ಸಂಗಪ್ಪ ಅವರನ್ನು ಕರೆದುಕೊಂಡು ಮನೆಗೆ ಬಂದು ಪದೇ-ಪದೇ ಪಿಡಿಸಿ ರೂ.30,000/- ಹಣವನ್ನು ಕೇಳಿದರು ಇಷ್ಟೊಂದು ಹಣ ನೀಡಕ್ಕೆ ನಮಗೆ ಆಗುವುದಿಲ್ಲ. ಎಂದು ಹೇಳಿದಾಗ ಅಧ್ಯಕ್ಷರ ಅಣ್ಣನಾದ ಶಿವಪುತ್ರಪ್ಪ ರವರು ಗ್ರಾಮ ಪಂಚಾಯತಿಯಲ್ಲಿ ನನ್ನ ಗಂಡನಾದ ಬಾಜಸಾಬ ಅವರನ್ನು ಕರೆಸಿ ಅವರಿಂದ ರೂ.3000/-ಗಳನ್ನು ಪಡೆದಿರುತ್ತಾರೆ. ಮತ್ತು ವಾರ್ಡ ಸದಸ್ಯರಾದ ಹೊನ್ನೂರಬೀ ಮತ್ತು ಸೈಯದ್ ಮೇರಾಜ್ ರವರು ತಲಾ 4000+4000 ಹಣವನ್ನು ಮನೆ ನೀಡಲು ಅಧ್ಯಕ್ಷರ ಅಣ್ಣನಾದ ಶಿವಪುತ್ರಪ್ಪ ಇವರಿಗೆ ನಾವು 8000/- ಗಳನ್ನು ನೀಡಿ ನಿಮಗೆ ಮನೆಯನ್ನು ಕೊಡಿಸಿರುತ್ತೇನೆಂದು ಹೇಳಿರುತ್ತಾರೆ,

ಕಾರಣ ಸರಕಾರದ ಆದೇಶ ಮಾರ್ಗ ಸೂಚನೆ ಉಲ್ಲಂಘಿಸಿ, ಬಡಕುಟುಂಬ ಅರ್ಹ ಫಲಾನುಭವಿಗಳಿಂದ ಹಣ ಪಡೆದು ಆಶ್ರಯ ಮನೆ ಹಂಚಿಕೆ ಮಾಡುವುದನ್ನು ತಡೆಹಿಡಿದು ವಸತಿ ರಹಿತ ಕುಟುಂಬಗಳಿಗೆ ಹಂಚಿಕೆ ಮಾಡಬೇಕು ಮತ್ತು ಅಧ್ಯಕ್ಷರು ಮತ್ತು ಸದಸ್ಯರ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸದಸ್ಯತ್ವ ರದ್ದುಪಡಿಸುವುದರ ಮೂಲಕ ವಸತಿರಹಿತ ಕುಟುಂಬದವಳಾಗಿದ್ದು. ನನಗೆ ಮನೆ ಮಂಜೂರು ಮಾಡಬೇಕೆಂದು ತಮ್ಮಲ್ಲಿ ಕೋರುತ್ತಿದ್ದೇನೆ.




error: Content is protected !!