

ಗಂಗಾವತಿ :ಗಂಗಾವತಿ ನಗರದ 29ನೇ ವಾರ್ಡಿನ ಆಶಾ ಕಾರ್ಯಕರ್ತೆಯಾದ ಶ್ರೀಮತಿ ಚನ್ನಮ್ಮ ಅವರು ಆನೆಗೊಂದಿ ಕಡೇಬಾಗಿಲು ಬಳಿ ಮೊನ್ನೆ ರಾತ್ರಿ ಅಪಘಾತಕ್ಕೆ ಈಡಾಗಿ ನಿಧನ ಹೊಂದಿರುವುದು ಒಂದು ವಿಷಾದನಿಯ ಸಂಗತಿ. ಕಾರಣ ಇಂದು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾದ ಶ್ರಿ ಈಶ್ವರ ಸವಡಿಯವರ ಸಮ್ಮುಖದಲ್ಲಿ ಶಾಕರಾದ ಪರಣ್ಣ ಮುನವಳ್ಳಿಯವರು ಶ್ರದ್ಧಾಂಜಲಿ ಕೋರಿ ಆ ಮಾತೆಯ ಆತ್ಮಕ್ಕೆ ಮುಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಸಿದರು.
ಮುಂದುವರೆದು ಶ್ರೀಮತಿ ಚನ್ನಮ್ಮ ಅವರಿಗೆ ಎರಡು ಮಕ್ಕಳಿದ್ದು, ಆ ಎರಡೂ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಶಾಸಕರು ಆಶ್ವಾಸನೆಯನ್ನ ನೀಡಿದರು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಮಾಜಿ ನಗರ ಸ್ಥಾಯಿ ಸಮಿತಿ ಸದಸ್ಯರಾದ ರಾಚಪ್ಪ ಸಿದ್ದಾಪುರ, ನಗರಸಭೆ ಸದಸ್ಯರಾದ ವಾದುದೇವ ನವಲಿ, ಎಸ್.ಟಿ. ಮೋರ್ಚ ಸದಸ್ಯರಾದ ಮಂಜುನಾಥ ಕೊಲ್ಕರ್, ಮೂಖಂಡರಾದ ಶಾಂತಮಲ್ಲಯ್ಯ ಸ್ವಾಮಿ ಹಾಗೂ ಎಲ್ಲಾ ಆಶಾ ಕಾರ್ಯಕರ್ತೆಯರು ಮತ್ತು ಆಸ್ಪತ್ರೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.