
ಗಂಗಾವತಿ: ನಗರದ 32 ನೇ ವಾರ್ಡ್ ಹೀರೆಜಂತಕಲ್ ನ ಚೆಲುವಾದಿ ಓಣಿಯ ವೇದಿಕೆ ಕಾರ್ಯಕ್ರಮದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕ್ರಮದಲ್ಲಿ ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿಯವರು ಮಾತನಾಡಿ ಮೊದಲನೆಯದಾಗಿ ಚಲುವಾದಿ ಸಮಾಜದವರು ರೆಡ್ಡಿ ಸಮಾಜದ ಬಂಧು ಬಳಗ.
ಕೆಲಸದ ವಿಷಯದಲ್ಲಿ ಮೊದಲ ಆದ್ಯತೆ ಸ್ವಚ್ಛತೆಗೆ ಸ್ಲಂ ಎನ್ನುವ ಹೆಸರು ಸಹಾ ಗಂಗಾವತಿಯಲ್ಲಿ ಇರದ ಹಾಗೆ ಮಾಡುವೆ. ಎಲ್ ಕೆಜಿ ಯಿಂದ ಪಿಜಿ ಯವರಗೂ ಓದುವ ವಿದ್ಯಾರ್ಥಿಗಳಿಗೆ ಬೇಕಾಗುವ ಖರ್ಚನ್ನು ತಂದೆ ತಾಯಿಗಳ ಅಕೌಂಟಿಗೆ ನೇರವಾಗಿ ಹಾಕುವುದಾಗಿ, ನಿವೇಶನ ಇದ್ದವರಿಗೆ ಮನೆ ಕಟ್ಟಿಸಿ ಕೊಡುವೇ, ನಿವೇಶನ ಇಲ್ಲದವರಿಗೆ ಜಾಗ ಖರೀದಿ ಮಾಡಿ ಅವರಿಗೂ ಮನೆ ಕಟ್ಟಿಸುವುದಾಗಿ ಭರವಸೆ ನೀಡಿದರು. ಹಾಗೂ ಸಮಾಜದ ಹಿರಿಯರು ಸೂಚಿಸಿದ 100×50 ಸೈಜ್ ನಲ್ಲಿಯೇ ತಾಂತ್ರಿಕವಾಗಿ ಪರಿಶೀಲಿಸಿ ಆ ಸೈಜ್ ನಲ್ಲಿಯೇ ಎಲ್ಲಾ ಸೌಲಭ್ಯಗಳನ್ನು ಹೊಂದಿದ ಹೈಟೆಕ್ ಕಲ್ಯಾಣ ಮಂಟಪ ಕಟ್ಟಿಸಿಕೊಡುವೆ.
ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದ ಮೇಲೆ ಸ್ಥಳೀಯ ಅಧಿಕಾರಿಗಳು ವಾರಕ್ಕೊಮ್ಮೆ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಕುಂದುಕೊರತೆಗಳನ್ನು ಬಗೆಹರಿಸುವ ಹಾಗೆ ಕ್ರಮ ಕೈಗೊಳ್ಳುವೇ ಒಂದು ವೇಳೆ ಅಧಿಕಾರಿಗಳು ಕೆಲಸವನ್ನು ಸರಿಯಾಗಿ ಮಾಡದಿದ್ದಲ್ಲಿ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವುದರಲ್ಲಿ ಸಂದೇಹವಿಲ್ಲ ಎಂದರು.
ನಾನು ಹೇಳುವ ಮಾತುಗಳನ್ನು ನೀವು ಬೇಕಾದರೇ ರೆಕಾರ್ಡ್ ಮಾಡಿಕೊಳ್ಳಿ ನಾನು ಮಾತಿನ ಮೇಲೆ ನಿಲ್ಲುವ ವ್ಯಕ್ತಿ.