
ಗಂಗಾವತಿ: ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗಾಗಿ ಕೊಪ್ಪಳ ಜಿಲ್ಲಾ ಪಕ್ಷೇತರರ ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಒಕ್ಕೂಟದ ಸಂಚಾಲಕರಾದ ಬಸವರಾಜ ಮ್ಯಾಗಳಮನಿಯವರು ಪ್ರಕಟಣೆಯಲ್ಲಿ ತಿಳಿಸಿದರು.
ಶಾಸಕ ಸ್ಥಾನಕ್ಕೆ ನಿಲ್ಲಬೇಕಾದರೆ ಮತ್ತು ಗೆಲ್ಲಬೇಕಾದರೆ ಹಣ ಬೇಕು. ಹಣವೇ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ಹುಸಿಗೊಳಿಸಿ, ಹಣವಿಲ್ಲದಿದ್ದರೂ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಸಂದೇಶವನ್ನು ಸಾದರಪಡಿಸುವುದೇ ಒಕ್ಕೂಟದ ಮುಖ್ಯ ಉದ್ದೇಶವಾಗಿದೆ. ಸೌಕರ್ಯವಿಲ್ಲದ ಶಾಲೆಗಳು, ಸೌಲಭ್ಯವಿಲ್ಲದ ಆಸ್ಪತ್ರೆಗಳು, ಬಸ್ ಸೌಕರ್ಯ ಇಲ್ಲದ ಗ್ರಾಮಗಳು, ಹದಗೆಟ್ಟ ರಸ್ತೆಗಳು, ರೈತರ ಬಗ್ಗೆ ಕಾಳಜಿ ಇರುವುದಿಲ್ಲ. ನಿರುದ್ಯೋಗಿಗಳ ಬಗ್ಗೆ ಚಿಂತನೆ ಮಾಡದಿರುವುದು ಇನ್ನೂ ಹಲವಾರು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೇ ಕೇವಲ ಹಣವೇ ಪ್ರಧಾನ ಎಂಬುದನ್ನು ಶ್ರೀಮಂತ ರಾಜಕಾರಣ ಗಳು ಸಾರಿಸಾರಿ ಹೇಳುತ್ತಿದ್ದಾರೆ.
ಎಲ್ಲಾ ರಾಜಕಾರಣ ಗಳು ಹಣವಿದೆ ಎಂಬ ಕಾರಣದಿಂದ ಭರ್ಜರಿ ಪ್ರಚಾರ ಮಾಡುತ್ತಾ, ದೇವಾಲಯಗಳಿಗೆ ಭೇಟಿ ಕೊಡುವುದು, ದೇಣ ಗೆ ಕೊಡುವುದು, ಇತ್ಯಾದಿಗಳ ಭರವಸೆ ನೀಡುತ್ತಾ, ಬಡ ಮುಗ್ಧ ಮತದಾರರಿಗೆ ಇಲ್ಲಸಲ್ಲದ ಆಮೀಷ ತೋರಿಸಿ ಮೋಸ ಮಾಡುತ್ತಿದ್ಧಾರೆ. ಅವರಿಗೆ ನಿಜವಾದ ಸೇವೆ ಮಾಡಬೇಕಾಗಿದ್ದರೆ ಚುನಾವಣೆಗೆ ಬರುವುದು ಅಗತ್ಯವಿಲ್ಲ. ತಮ್ಮಲ್ಲಿರುವ ಹಣದಿಂದ ದೇವಾಲಯಗಳನ್ನು ನಿರ್ಮಿಸಬೇಕು. ನಿರಾಶ್ರಿತರಿಗೆ ಜಾಗ ನೀಡಬೇಕು. ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡಬೇಕು. ಗಂಗಾವತಿಯಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗದವರಿಗೆ ಜಾಗ ಮತ್ತು ಮನೆಗಳು ಇರುವುದಿಲ್ಲ.
ಅಂತವರಿಗೆ ಮನೆ ಕಟ್ಟಿಸಿಕೊಡಬೇಕು. ಖಾಲಿ ಇರುವ ಸ್ಥಳದಲ್ಲಿ ಸರ್ಕಾರಿ ಶಾಲೆಗಳಿಗೆ ಲಕ್ಷಾನುಗಟ್ಟಲೆ ಹಣ ನೀಡಿ, ಬಡಮಕ್ಕಳು ಓದುತ್ತಿರುವ ಶಾಲೆಗಳನ್ನು ಅಭಿವೃದ್ಧಿಪಡಿಸಿ ಬದಲಾವಣೆ ಮಾಡುವುದು ನಿಜವಾದ ಸಮಾಜಸೇವೆಯಾಗಿದೆ.
ಇಂತಹ ಕೆಲಸಗಳನ್ನು ಮಾಡದೆ ಚುನಾವಣೆಯಲ್ಲಿ ಗೆಲ್ಲುವ ತಂತ್ರಗಾರಿಕೆಗೋಸ್ಕರ ಹಣದ ಆಮೀಷ ತೋರಿಸುತ್ತಿದ್ದಾರೆ. ಆದರೆ ನಮ್ಮ ಜನ ಹಣದ ಆಸೆಗೆ ಓಟು ಹಾಕುವುದಿಲ್ಲ. ಹಣದ ಆಸೆ ತೋರಿಸುವ ರಾಜಕೀಯ ನಾಯಕರಿಗ�