
ಕೊಪ್ಪಳ: ಗಂಗಾವತಿ ಕನಕಗಿರಿ ರಸ್ತೆಯಲ್ಲಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಪಕ್ಷದ ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ಧನ ರೆಡ್ಡಿಯವರು ಆದೇಶದ ಮೇರೆಗೆ ಜಿಲ್ಲಾಧ್ಯಕ್ಷರಾದ ಶ್ರೀ ಮನೋಹರ ಗೌಡ ಹೇರೂರು ರವರು ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಶ್ರೀ ಚನ್ನವೀರನಗೌಡ ಕೋರಿ ಗಂಗಾವತಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿ ಶ್ರೀಮತಿ ರಾಜೇಶ್ವರಿ ಗಂ ಡಿ ಎಮ್ ಸುರೇಶ್ ಆನೆಗುಂದಿ ಹಾಗೂ ಕೊಪ್ಪಳ ಜಿಲ್ಲಾ ಮಾಧ್ಯಮ ವಕ್ತಾರರನ್ನಾಗಿ ಶ್ರೀ ಸಂಗಮೇಶ್ ಬಿ ಬಾದವಾಡಗಿ ಚಿಲಕಮುಖಿ ರನ್ನು ನೇಮಕಗೊಳಿಸಿ ಪಕ್ಷದ ಕಚೇರಿಯ ಕಾರ್ಯಕ್ರಮದಲ್ಲಿ ನೇಮಕಾತಿಯ ಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗ್ರಾಮೀಣ ಹಾಗೂ ನಗರ ಘಟಕಗಳ ಅಧ್ಯಕ್ಷರ ಗಳಾದ ಡಿ ಕೆ ದುರ್ಗಪ್ಪ ಆಗೋಲಿ, ವಿರೇಶ್ ಬಲ್ಕುಂದಿ ಹಾಗೂ ಯಮನೂರು ಚೌಡ್ಕಿ, ಮಲ್ಲೆಶಪ್ಪ ಗುಮಗೇರಿ, ವಿರೂಪಾಕ್ಷ ಗೌಡ ಹೇರೂರು, ರಮೇಶ್ ಹೊಸಮಲಿ, ಲಿಂಗನಗೌಡ ಹೇರೂರು, ವೆಂಕಟೇಶ್ ಈಳಿಗೇರ, ಡಿ ಎಮ್ ಸುರೇಶ್ ಇನ್ನೂ ಮುಂತಾದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.